ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಕರ್ನಾಟಕ ದಕ್ಷಿಣದ ವಿಶ್ವ ಹಿಂದೂ ಪರಿಷತ್ನ ಗೋ ರಕ್ಷಾ ಪ್ರಮುಖ್ ಹಾಗೂ ಶನಿಪೂಜಾ ಸಮಿತಿಯ ಸ್ಥಾಪನ ಅಧ್ಯಕ್ಷರಾಜ ಸುನಿಲ್ ಕೆ ಆರ್ ರವರ 50 ನೆಯ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಆರ್ಥಿಕವಾಗಿ ತೀರ ಅಶಕ್ತವಾಗಿರುವ ಕುಟುಂಬವೊಂದಕ್ಕೆ ಸೂರೊಂದನ್ನು ನಿರ್ಮಿಸಿಕೊಡುವ ಮೊದಲ ಹೆಜ್ಜೆಯಾಗಿ ಭೂಮಿಪೂಜೆ ಕಾರ್ಯಕ್ರಮ ನಡೆಯಿತು.

ಈ ಶುಭ ಸಂದರ್ಭದಲ್ಲಿ ಜಗದೀಶ್ ಮಲ್ಯ, ಕಾರ್ಕಳ ಟೈಗರ್ಸ್ನ ಪ್ರಶಾಂತ್ ಕಾಮತ್, ಹರೀಶ್ ಅಮೀನ್ ಮೊದಲಾದ ಗಣ್ಯರು ಹಾಗೂ ವಿಶ್ವ ಹಿಂದೂ ಪರಿಷತ್ನ ವೀರ ಮಾರುತಿ ಶಾಖೆಯ ಕಾರ್ಯಕರ್ತರು, ಸಾರ್ವಜಿಕ ಶನಿಪೂಜಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



