ಕಾರ್ಕಳಹೆಬ್ರಿ

ಕೆರೆಬೆಟ್ಟು ಶಾಲೆಯಲ್ಲಿ ನೋಟ್ಸ್ ಪುಸ್ತಕ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಬೆಟ್ಟು ಇಲ್ಲಿ ಭೂತ್ ಗುಂಡಿ ದಿ. ಚಂದ್ರಶೇಖರ ಹೆಗ್ಡೆ ಮತ್ತು ಎಳಗೋಳಿ ದಿ.ಕೃಷ್ಣಮ್ಮ ಶೆಡ್ತಿಯವರ ಸ್ಮರಣಾರ್ಥ ಅವರ ಪುತ್ರ ಪ್ರಸನ್ನ ಚಂದ್ರಶೇಖರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕೊಡ ಮಾಡಿರುವ ಉಚಿತ ನೋಟ್ಸ್ ಪುಸ್ತಕಗಳ ವಿತರಣಾ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಪ್ರಸನ್ನ ಚಂದ್ರಶೇಖರ್ ಶೆಟ್ಟಿ ಅವರ ಸಹೋದರ, ಉದ್ಯಮಿ ವಸಂತ ಶೆಟ್ಟಿ ಎಳಗೋಳಿ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳನ್ನು ವಿತರಿಸಿ ಶುಭವನ್ನು ಹಾರೈಸಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಸುಮಿತ್ ಹೆಗ್ಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಮಾಲತಿ, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿನಂತಿನಿ ಆಚಾರ್ಯ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

Related posts

ಕರಾಟೆಯಲ್ಲಿ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಿಗೆ ‘ಯುವ ಸಾಧಕ’ ಬಿರುದು

Madhyama Bimba

ಪಡುಕುಡೂರಿನಿಂದ ಸಿರಿಬೈಲು ದೇವಸ್ಥಾನಕ್ಕೆ ಪಾದಯಾತ್ರೆ

Madhyama Bimba

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ಮಧ್ಯೆ ವೈಷಮ್ಯ ತರುವ ಬರವಣಿಗೆ- ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More