ಕಾರ್ಕಳ

ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ. ರವಿ ಆಚಾರ್ಯ ಆಯ್ಕೆ- ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್ ಆಚಾರ್ಯ ಮತ್ತು ಪಿ. ವಸಂತ್ ಆಚಾರ್ಯ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಪಿ ರವಿ ಆಚಾರ್ಯ ಪೆರ್ವಾಜೆ, ಜೊತೆ ಮೊಕ್ತೇಸರರಾಗಿ ನಿಟ್ಟೆ ಸುರೇಶ್ ಆಚಾರ್ಯ ಮತ್ತು ಪಿ. ವಸಂತ್ ಆಚಾರ್ಯ ಆಯ್ಕೆಯಾದರು.

ಜೂ.28ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 10 ಗಂಟೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯು ಜರುಗಿತು. ಪದಗ್ರಹಣ ಸಮಾರಂಭವು ಜುಲೈ 9ರಂದು ದೇವಸ್ಥಾನದಲ್ಲಿ ನಡೆಯಲಿರುವುದು.

ಕುದುರೆಮುಖ ವನ್ಯಜೀವಿ ಅಭಯಾರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ಪುರೋಹಿತ್ ವಿಠಲ್ ಆಚಾರ್ಯ ಪ್ರಾರ್ಥಿಸಿ, ನಿಕಟ ಪೂರ್ವ ಆಡಳಿತ ಮೊಕ್ತೇಸರರು ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಭಜನಾ ಸೇವಾ ಸಮಿತಿ ಅಧ್ಯಕ್ಷರಾದ ದಿನೇಶ್ ಆಚಾರ್ಯ ಅತ್ತೂರು ವಂದಿಸಿ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಎಂ. ರಮೇಶ್ ಆಚಾರ್ಯ ನಿರೂಪಿಸಿದರು.

Related posts

ಕಡ್ತಲ: ವರ್ಗಾವಣೆಗೊಂಡ ಪಿಡಿಓ ಸುರೇಖಾರವರಿಗೆ ಅಭಿನಂದನಾ ಸಮಾರಂಭ

Madhyama Bimba

ಕೆ.ಸಿ.ಇ.ಟಿ ಫಲಿತಾಂಶ -2026-ಜ್ಞಾನಸುಧಾದ ಎನ್. ಶ್ರೇಯಸ್‌ಗೆ ನಾಲ್ಕು ವಿಭಾಗಗಳಲ್ಲಿ ನಾಲ್ಕನೇ ರ್‍ಯಾಕ್ – ಇಂಜಿನಿಯರಿಂಗ್‌ನಲ್ಲಿ 25 ವಿದ್ಯಾರ್ಥಿಗಳಿಗೆ 500ರ ಒಳಗಿನ ರ್‍ಯಾಂಕ್ -28 ವಿದ್ಯಾರ್ಥಿಗಳಿಗೆ ಇತರ ವಿಭಾಗಗಳಲ್ಲಿ ನೂರರೊಳಗಿನ ರ್‍ಯಾಂಕ್

Madhyama Bimba

ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಕವಿತಾ ಹರೀಶ್, ಕಾರ್ಯದರ್ಶಿಯಾಗಿ ಮಲ್ಲಿಕ ಗಣೇಶ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More