
ವಿ. ಎಸ್. ಅರೆಂಜರ್ಸ್ ನೇತೃತ್ವದಲ್ಲಿ ಅಂಚೆ ಇಲಾಖೆಯ ಸಹಯೋಗದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಸಮಗ್ರ ರಕ್ಷಣೆ ಯೋಜನೆ ಮೂಡುಬಿದಿರೆ ತಾಲೂಕಿನ ಪಣಪಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿಇಂದು ನೆರವೇರಿತು. ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿಯವರು ಉದ್ಘಾಟನೆ ನೆರವೇರಿಸಿದರು. ನಂದೊಟ್ಟು ಯುವರಾಜ್ ಹೆಗ್ಡೆ ,ಪಂಚಾಯತ್ ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ, ಶ್ರೀಮತಿ ಜನಿತಾ , ವಿ. ಎಸ್.. ಅರೇಂಜರ್ಸ್ ಸಂಸ್ಥೆಯ ಮಾಲಿಕರಾದ ರಮನಾಥ್ ಸಾಲ್ಯಾನ್, ವಿ.ಎಸ್,ವಿಟಲ ಗೆಳೆಯರ ಬಳಗದ ಅಧ್ಯಕ್ಷರಾದ ಸದಾನಂದ ಪೂಜಾರಿ , ಅಂಚೆ ಇಲಾಖೆಯ ಅಧಿಕಾರಿ ಗುರುಪ್ರಸಾದ್ ಕೆ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
100ಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು,
ಸಂಘಟಕ ಅಶ್ವಥ್ ಪಣಪಿಲ ಪ್ರಾಸ್ತಾವಿಕವಾಗಿ ಮತನಾಡಿ ನಿರೂಪಿಸಿದರು.
