ಕಾರ್ಕಳಹೆಬ್ರಿ

ರೆಂಜಾಳ ಪೇರಾಲ್ದಬೆಟ್ಟು ಶಾಲಾ ವಾರ್ಷಿಕೋತ್ಸವ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೇರಾಲ್ದಬೆಟ್ಟು ರೆಂಜಾಳ ಇದರ 60ರ ಸಂಭ್ರಮದ ಪ್ರಯುಕ್ತ ವಾರ್ಷಿಕೋತ್ಸವ ಸಮಾರಂಭ ಡಿ.21 ರಂದು ಶಾಲಾ ವಠಾರದಲ್ಲಿ ನಡೆಯಿತು.


ಕಾರ್ಕಳ ಶಾಸಕ, ಮಾಜಿ ಸಚಿವರಾದ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಹಾವೀರ ಹೆಗ್ಡೆ ಬ್ರಾಣ ಬೆಟ್ಟು, ಸಮಿತಿಯ ಗೌರವ ಅಧ್ಯಕ್ಷ ರಮೇಶ್ ಶೆಟ್ಟಿ ಮಂಜೊಟ್ಟು, ಸಂಸ್ಕೃತಿ ಸಿಂಚನದ ಸಂಚಾಲಕ ರಾಜೇಶ್ ರೆಂಜಾಳ, ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಆಚಾರ್ಯ, ಸಮಿತಿಯ ಅಧ್ಯಕ್ಷ ರವಿಚಂದ್ರ ಜೈನ್, ಮುಖ್ಯ ಶಿಕ್ಷಕಿ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಧನ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ವೈಷ್ಣವಿ ಹಾಗೂ ಆರಾಧ್ಯ ಪ್ರಾರ್ಥಿಸಿದರು. ಅನಿತಾ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಬಹುಮಾನ ವಿಜೇತರ ಪಟ್ಟಿಯನ್ನು ಆಶಾಲತಾ ಆಚಾರ್ಯ, ಹಿರಿಯರ ಬಹುಮಾನ ವಿಜೇತರ ಪಟ್ಟಿಯನ್ನು ಸಂತೋಷ್ ಹೇಡ್ಮೆ ವಾಚಿಸಿದರು. ರಾಜೇಶ್ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಆಚಾರ್ಯ ಧನ್ಯವಾದವಿತ್ತರು. ನಾರಾಯಣ ಭಟ್ ದೇಜುಬೆಟ್ಟು, ನಾಗಪ್ಪ, ದಿವಾಕರ ಶೆಟ್ಟಿ, ಆನಂದ್ ಕೋಟ್ಯಾನ್, ರಾಜೇಶ್ ಶೆಟ್ಟಿ, ಸಮಿತಿಯ ಎಲ್ಲಾ ಸದಸ್ಯರ ಸಹಕರಿಸಿದರು.

ನಂತರ ಮೂಡಬಿದ್ರಿ ಪಿಂಗಾರ ಕಲಾವಿದರಿಂದ ನಾಟಕ ‘ಕದಂಬ’ ಪ್ರದರ್ಶನಗೊಂಡಿತು.

Related posts

ನಕ್ಸಲೀಯರನ್ನು ಶರಣಾಗಿಸಿದ ರಾಜ್ಯ ಸರಕಾರದ ನಡೆ ಸ್ವಾಗತಾರ್ಹ: ಬಿಪಿನ್ ಚಂದ್ರಪಾಲ್

Madhyama Bimba

ಕಾರ್ಕಳದ ರಸ್ತೆ, ಸೇತುವೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 13 ಕೋಟಿ ರೂಪಾಯಿ ಅನುದಾನ ಬಿಡುಗಡೆ: ಅಭಿವೃದ್ಧಿ ಶೂನ್ಯ ಎನ್ನುತ್ತಿದ್ದ ಸುನೀಲ್ ಕುಮಾರ್,ಗೆ ಕಪಾಳ ಮೋಕ್ಷ‌: ಶುಭದರಾವ್

Madhyama Bimba

ಉಡುಪಿ: ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More