Blog

ಕಾರ್ಕಳ ಅಭಿವೃದ್ಧಿ – ಸಚಿವರಿಗೆ ಮನವಿ ಮಾಡಿದ ಕಾಂಗ್ರೇಸ್ ನಾಯಕ

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಸಭೆಯ ಸಂದರ್ಭದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕುರಿತು ಲೋಕೋಪಯೋಗಿ ಸಚಿವರಾದ  ಸತೀಶ್ ಜಾರಕಿಹೊಳಿ  ಅವರಿಗೆ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಮನವಿ ಪತ್ರವನ್ನು ನೀಡಿ ವಿನಂತಿಯನ್ನು ಮಾಡಿದರು.

ಕಾರ್ಕಳ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗ ಬೇಕಿದೆ. ಈಗಾಗಲೇ ಜನರು ತಮ್ಮ ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುನಿಯಾಲು ಉದಯ ಶೆಟ್ಟಿಯವರ ಬಳಿ ವಿನಂತಿ ಮಾಡಿದ್ದರು.

ಹಲವಾರು ಗ್ರಾಮಗಳ ಜನರ ಮನವಿಯನ್ನು ಒಗ್ಗೂಡಿಸಿದ ಅವರು ಸಚಿವರ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿ ಅನುದಾನ ಮಂಜೂರು ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ

ಶೀಘ್ರದಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಸಚಿವರು ಉದಯ ಶೆಟ್ಟಿಯವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ

Related posts

ಆದಿತ್ಯವಾರ ಕುಲಾಲರಿಂದ ಗೋವಿಗಾಗಿ ಮೇವು ಕಾರ್ಯಕ್ರಮ

Madhyama Bimba

ಶಾಲಾ ಬಸ್ ಬೈಕ್ ಅಪಘಾತ * ಬೈಕ್ ಸವಾರ ಮೃತ್ಯು

Madhyama Bimba

ಕ್ರೀಡೆಯಲ್ಲಿ ಪ್ರಣಯ್ ಶೆಟ್ಟಿ ರಾಜ್ಯ ಮಟ್ಟಕ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More