ಕಾರ್ಕಳ

ಕಾರ್ಕಳ ಹಿರಿಯಂಗಡಿ ನಿವಾಸಿಗಳಿಗೆ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ತೂತು

ಕಾರ್ಕಳ ಹಿರಿಯಂಗಡಿ ಪರಿಸರದ ನಿವಾಸಿಗಳಿಗೆ ನಿತ್ಯ ನೀರು ವಿತರಣೆ ಮಾಡುವ ನೀರಿನ ಟ್ಯಾಂಕ್‌ನಲ್ಲಿ ತೂತು ಬಿದ್ದಿದೆ.
ಕಾರ್ಕಳದ ಆನೆಕೆರೆಯಿಂದ ತಾಲೂಕು ಕಚೇರಿಯತ್ತ ಸಾಗುವ ಚತುಷ್ಪಥ ರಸ್ತೆಯ ದೈವಸ್ಥಾನದ ಪಕ್ಕವೇ ಇರುವ ಈ ನೀರಿನ ಟ್ಯಾಂಕ್‌ನಿಂದ ಹಲವಾರು ವರ್ಷಗಳಿಂದ ಈ ಪರಿಸರದ ನಿವಾಸಿಗಳಿಗೆ ನೀರು ನೀಡಲಾಗುತ್ತಿದೆ.

ಆದರೆ ಕಳೆದ ಕೆಲವು ಸಮಯ ಗಳಿಂದ ಈ ನೀರಿನ ಟ್ಯಾಂಕ್ ತೂತು ಬಿದ್ದಿದೆ. ಅದು ಕೂಡಾ ಕಾಂಕ್ರೀಟ್ ಮೇಲ್ಭಾಗದಲ್ಲಿ .
ತೂತು ಬಿದ್ದ ಈ ನೀರಿನ ಟ್ಯಾಂಕ್ ನಲ್ಲಿ ಮನುಷ್ಯ ಒಳ ಹೋಗುವಷ್ಠರ ಮಟ್ಟಿಗೆ ಸ್ಥಳಾವಕಾಶವಿದೆ.

ಯಾವುದೇ ಹೊತ್ತಿನಲ್ಲಿ ಈ ನೀರನ್ನು ಟ್ಯಾಂಕ್‌ನ ಹೊರಗಿನಿಂದ ಯಾವುದೇ ಕಾಡು ಪ್ರಾಣಿಗಳು ಅಥವಾ ಹಾವುಗಳು ಅಥವಾ ನಾಯಿಯಂತಹ ಪ್ರಾಣಿಗಳು ಕುಡಿಯುವಷ್ಠರ ಮಟ್ಟಿಗೆ ಈ ಟ್ಯಾಂಕ್‌ನಲ್ಲಿ ಅವಕಾಶಗಳಿವೆ.

ಹಿರಿಯಂಗಡಿಯ ಆಸು ಪಾಸಿನ ಮನೆಗಳಿಗೆ ನೀರು ನೀಡುವ ಈ ನೀರಿನ ಟ್ಯಾಂಕ್‌ನ ನೀರನ್ನು ಹಲವಾರು ಮಂದಿ ಬಳಕೆ ಮಾಡುತ್ತಾರೆ. ಹಲವಾರು ಮನೆಗಳಲ್ಲಿ ಕುಡಿಯಲು ಕೂಡಾ ಉಪಯೋಗ ಮಾಡುತ್ತಾರೆ.

ಜನರ ಸುರಕ್ಷತೆಯ ನಿಟ್ಟಿನಲ್ಲಿ ಈ ಕಾಂಕ್ರೀಟ್ ಟ್ಯಾಂಕ್ ವ್ಯವಸ್ಥೆಯನ್ನು ಸುರಕ್ಷತೆಯ ನಿಟ್ಟಿನಲ್ಲಿ ಸರಿಪಡಿಸುವುದು ಒಳಿತು. ಅದರ ಪಕ್ಕದಲ್ಲೇ ಇರುವ ಶೆಡ್‌ಗೆ ಕೂಡಾ ಯಾವುದೇ ಸುರಕ್ಷತೆಯಿಲ್ಲ. ಆ ಶೆಡ್‌ಗೆ ಬೀಗ ಹಾಕದೆ ಹಲವಾರು ಸಮಯಗಳೇ ಕಳೆದು ಹೋಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಇವೆಲ್ಲದರ ಬಗ್ಗೆ ಕಾರ್ಕಳ ಪುರಸಭೆ ತಕ್ಷಣಕ್ಕೆ ಗಮನ ಕೊಡುವ ಅಗತ್ಯವಿದೆ.

 

Related posts

ಮುದ್ರಾಡಿ: ಮೋಟಾರ್ ಸೈಕಲ್‌ಗೆ ಪಿಕಪ್ ವಾಹನ ಡಿಕ್ಕಿ

Madhyama Bimba

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Madhyama Bimba

ಮರ್ಣೆ ಕೈಕಂಬ ಬಳಿ ಮೋಟಾರು ಸೈಕಲ್‌ಗೆ ಲಾರಿ ಡಿಕ್ಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More