ಹೆಬ್ರಿ: ನಾಡ್ಪಾಲು ಗ್ರಾಮದ ಆಗುಂಬೆ ಘಾಟಿ ಸಮೀಪ ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಡಿ. 07ರಂದು ವರದಿಯಾಗಿದೆ.

ತುಮಕೂರು ತುರುವೇಕೆರೆಯ ವರುಣ ಪ್ರಸಾದ ಬಿ.ಪಿ. (42)ರವರು ರಶ್ಮಿ, ಜ್ಯೋತಿ, ಹಾಗೂ ರೀಧಿಕಾರವರೊಂದಿಗೆ ಕಾರಿನಲ್ಲಿ ತುರುವೇಕೆರೆಗೆ ಹೋಗುತ್ತಿರುವಾಗ ಆಗುಂಬೆ ಘಾಟಿ ಬಳಿ ಪಿಕ್ ಅಫ್ ವಾಹನವನ್ನು ಅದರ ಚಾಲಕ ಯಾಸಿನ್ ಓವರ್ ಟೇಕ್ ಮಾಡುವ ಬರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡು ಹೆಬ್ರಿ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
