ಮಾರ್ನಾಡು ಶ್ರೀ ಕ್ಷೇತ್ರ ಹೊಪಾಲ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನ್ನಛತ್ರ ಕಟ್ಟಡದ ಅಭಿವೃದ್ಧಿಗೆ ಸ್ಥಳೀಯ ಚೇತನ ಯುವಕ ಮಂಡಲ 50ಸಾವಿರ ರೂ. ದೇಣಿಗೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ರಾಜೇಶ್ ಬಲ್ಲಾಳ್ ಅವರಿಗೆ ಹಿರಿಯ ಸದಸ್ಯ ದೇವರಾಜ್ ಸುವರ್ಣ ಪೊಸಲಾಯಿ ಹಸ್ತಾಂತರಿಸಿದರು.

ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ ಎಂ. ವಾಸುದೇವ ಭಟ್, ಸುನಿಲ್ ಪೂಜಾರಿ, ನಿತೇಶ್ ಪೂಜಾರಿ, ನವೀನ್ ಪೂಜಾರಿ, ಪ್ರಕಾಶ್ ಆಚಾರ್ಯ, ನಾಗೇಶ್ ಆಚಾರ್ಯ, ರಾಜೇಶ್ ಗೋಳಾರ, ಪ್ರವೀಣ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಚೇತನ ಯುವಕ ಮಂಡಲ ದೈವಸ್ಥಾನದ ಉತ್ಸವವ ಮತ್ತಿತರ ಧಾರ್ಮಿಕ ಚಟುವಟಿಕೆಯ ಪ್ರಗತಿಗೆ ಕಳೆದ 30 ವರ್ಷಗಳಿಂದ ಉತ್ತಮ ಸಹಕಾರ ವನ್ನು ನೀಡುತ್ತಾ ಬಂದಿರುವುದನ್ನು ಆಡಳಿತ ಮೊಕ್ತೇಸರರು ಈ ಸಂದರ್ಭದಲ್ಲಿ ಸ್ಮರಿಸಿದರು.

