Blog

ಸಕಲೇಶಪುರದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸಮಸ್ಯೆ ಸರಿ ಮಾಡಿ

ಸಕಲೇಶಪುರದ ಕೆಎಸ್ಆರ್ಟಿಸಿ ಬಸ್ಸುಗಳ ಪರಿಸ್ಥಿತಿ ಹದ ಗೆಡುತ್ತಿದೆ.

ವಿಶೇಷವಾಗಿ KA18F0610 ಸಂಖ್ಯೆಯ ಬಸ್ಸು, ಪ್ರತಿದಿನವೂ ಸಕಲೇಶಪುರ, ಬಾಗೆ, ಬಾಳ್ಳುಪೇಟೆ ಮತ್ತು ಕೊಡ್ಲಿಪೇಟೆ ಮಾರ್ಗದಲ್ಲಿ ಸಂಚರಿಸುತ್ತಿದೆ.

ಆದರೆ ಈ ಬಸ್ಸುಗಳು ಹಳೆಯದಾಗಿದ್ದು ಮತ್ತು ಯಂತ್ರದಲ್ಲಿ ತೊಂದರೆ ಇದೆ.

ಒಂದಾದ ಮೇಲೆ ಒಂದಾಗಿ ಕೆಟ್ಟ ನಿಲ್ಲುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ವಿಶೇಷವಾಗಿ ಇತ್ತೀಚೆಗೆ ಬೆಳಿಗ್ಗೆ ಬಾಗೆ ಸರ್ಕಲ್ ನಲ್ಲಿ ಈ ಬಸ್ಸು ಕೆಟ್ಟು ನಿಂತಿದ್ದು, ಪ್ರಯಾಣಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹಳ ಅಸೌಕರ್ಯ ಉಂಟಾಗುತ್ತಿದೆ.

ಸಕಲೇಶಪುರ ಸಾರಿಗೆ ಡಿಪೋಗೆ ಈ ಸಮಸ್ಯೆಗಳ ಕುರಿತು ಹಲವಾರು ಬಾರಿ ಮನವಿ ಮಾಡಿದ್ದರೂ ಸ್ಪಂದನೆಗಳಿಲ್ಲದಿರುವ ಕಾರಣ, ಮಲೆನಾಡು ರಕ್ಷಣಾ ಸೇನೆಯ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಹೊಸ ಕೊಪ್ಪಲು ಅವರು ಸಾರಿಗೆ ಇಲಾಖೆಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಈ ಸಮಸ್ಯೆಗೆ ಪರಿಹಾರವಾಗಿ:ಹಳೆಯ ಬಸ್ಸುಗಳನ್ನು ಬದಲಾಯಿಸಿ ನವೀಕರಿಸಿದ ವಾಹನಗಳನ್ನು ವ್ಯವಸ್ಥೆ ಮಾಡುವುದು.ರಿಪೇರಿ ಮತ್ತು ನಿರ್ವಹಣೆಗೆ ಹೆಚ್ಚಿನ ಸಮಯ ಮತ್ತು ಸಂಪನ್ಮೂಲಗಳನ್ನು ಮೀಸಲಿಡುವುದು.ಪ್ರಯಾಣಿಕರ ರಕ್ಷಣೆಗೆ ಸುರಕ್ಷಿತ ಮತ್ತು ಸಮರ್ಥ ಸಂಚಾರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು.ಸಾರ್ವಜನಿಕರಿಂದ ಮತ್ತು ಬಸ್ ಚಾಲಕರಿಂದ ತ್ವರಿತ ಮಾಹಿತಿಗಳನ್ನು ಸಂಗ್ರಹಿಸಿ ತಕ್ಷಣ ದುರಸ್ತಿ ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದ್ದಾರೆ.

Related posts

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಪಂದನೆ ಮಾಡಿದ ಅಧಿಕಾರಿಗಳಿಗೆ ಸನ್ಮಾನ

Madhyama Bimba

ನಾನಿಲ್ತಾರ್ ಕುಲಾಲ ಸಂಘದ ಕ್ರೀಡಾಕೂಟ

Madhyama Bimba

ಮುನಿಯಾಲು ಕಾಡುಹೊಳೆ: ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕರ್ಪಾಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More