ಕಾರ್ಕಳ: ವ್ಯಕ್ತಿಯೋರ್ವರು 4ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೇ. 19ರಂದು ವರದಿಯಾಗಿದೆ.
ನೀಲಯ್ಯ @ ತುಕರಾಮ (57) ಮೃತಪಟ್ಟವರು.
ಇವರು ಕಾರ್ಕಳ ಸಾಣೂರಿನಲ್ಲಿರುವ ರಾಜೇಶ್ವರಿ ನ್ಯಾಶನಲ್ ಸ್ಕೂಲ್ ಕಟ್ಟಡದ 4ನೇ ಮಹಡಿಯ ಪ್ಯಾಸೆಜ್ನಲ್ಲಿ ಕೆಲಸ ಮಾಡುತ್ತಿರುವಾಗ ಕಟ್ಟಡದ ಕೆಲಸ ಮಾಡಿಸುತ್ತಿದ್ದ ಸುಧೀರ ಶೆಣೈ ಯಾವುದೇ ಮುಂಜಾಗ್ರತ ಕ್ರಮ ವಹಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿರುವುದರಿಂದ ನೀಲಯ್ಯ @ ತುಕರಾಮ 4ನೇ ಮಹಡಿಯಿಂದ ನೆಲಕ್ಕೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .
