ಕಾರ್ಕಳ: ವ್ಯಕ್ತಿಯೋರ್ವರು ಟ್ರಾಕ್ಟರ್ನಿಂದ ಬಿದ್ದು ಟ್ರಾಕ್ಟರ್ ನ ಮೇಸಿನ್ ತಲೆಗೆ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಾ. 27ರಂದು ವರದಿಯಾಗಿದೆ.
ಶ್ರೀಧರ ಮೃತಪಟ್ಟವರು.
ಕಾರ್ಕಳ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆ ಬೈಲು ಎಂಬಲ್ಲಿ ಗದ್ದೆಯಲ್ಲಿ ಟ್ರಾಕ್ಟರ್ನಲ್ಲಿ ಕೆಲಸ ಮಾಡುತ್ತಿರುವಾಗ ಶ್ರೀಧರ ಟ್ರಾಕ್ಟರ್ನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಭತ್ತದ ಪಿಂಡಿಯನ್ನು ಮಾಡುತ್ತಿರುವಾಗ ಟ್ರಾಕ್ಟರ್ ನಿಂದ ಕೆಳಗೆ ಬಿದ್ದು ಟ್ರಾಕ್ಟರ್ ನ ಹಿಂಬದಿಯ ಮೇಸಿನ್ ಶ್ರೀಧರನ ತಲೆಗೆ ತಾಗಿ ತೀವ್ರ ತರಹದ ಪೆಟ್ಟಾಗಿ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
