ಹೆಬ್ರಿ ತಾಲೂಕಿನ ಕಬ್ಬಿನಾಲೆ ತಿಂಗಳಮಕ್ಕಿ, ಪೀತ್ಬೈಲ್, ಸುತ್ತಮುತ್ತಲಿನ ಪರಿಸರದಲ್ಲಿ ಕಾಡಾನೆಯೊಂದು ಹಲವು ದಿನಗಳಿಂದ ಬೀಡುಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ತೆಂಗು, ಬಾಳೆ, ಅಡಿಕೆ ಮರಗಳನ್ನು ನಾಶಮಾಡಿದೆ.

ಅಲ್ಲದೆ ತಿಂಗಳಮಕ್ಕಿ ಆನಂದ ಗೌಡ ಎಂಬುವವರು ಮನೆಯ ಅಂಗಳದಲ್ಲಿ ಪ್ರತಿ ದಿನ ಓಡಾಡುತ್ತಿದ್ದು, ಭಯಭೀತರಾದ ಇವರು ತಮ್ಮ ಮನೆ ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಸ್ಥಳೀಯರು ಭಯದಿಂದ ಜೀವನ ನಡೆಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ವಹಿಸದೆ ಕಾಡಾನೆಯನ್ನು ಅಲ್ಲಿಂದ ಓಡಿಸಬೇಕು. ಹಾಗೆಯೇ ಹಾನಿಯಾದ ಕೃಷಿಗೆ ಸರಕಾರದಿಂದ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ 2 ವರ್ಷಗಳಿಂದ ಶಿರ್ಲಾಲು, ಅಂಡಾರು, ಮುಟ್ಲುಪಾಡಿ, ಕಬ್ಬಿನಾಲೆ, ನಾಡ್ಪಾಲು ಕೆಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡುತ್ತಾ ಬಂದಿರುತ್ತದೆ.
