ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಣೂರು ಸೇತುವೆ ಬಳಿ ಎನ್ಹೆಚ್ ಅವರು ಹಾಕಿದ ಹೆಚ್ಡಿ ಪೈಪ್ ಲೈನ್ ತೀರಾ ಕಳಪೆ ಗುಣ ಮಟ್ಟದ ಸಾಮಾಗ್ರಿ ಯಾಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟು ಗ್ರಾಮಸ್ತರಿಗೆ ನೀರೇ ಕೊಡಲಾಗದಂತ ಪರಿಸ್ಥಿತಿ ಬಂದಿದೆ.
ಸಾಣೂರು ಸೇತುವೆ ಪರಿಸರದಿಂದ ಶೇಡಿಗುಡ್ಡೆ ಯೇರ್ನಡ್ಕ ರಸ್ತೆಯ ಜನರಿಗೆ ಸುಮಾರು ಎರಡು ವಾರ ದಿಂದನೀರಿಲ್ಲ, ಪಿಡಿಓ ಅವರಿಗೆ ಮುಖತಃ ಅಥವಾ ಫೋನ್ ಮೂಲಕ ತಿಳಿಸಿದಾಗ ಅವರು ಎನ್ಹೆಚ್ ನವರಿಗೆ ತಿಳಿಸಿದ್ದೇನೆ ಎಂದು ಹೇಳುತ್ತಾರೆ.
ಪಂಚಾಯತ್ ಅವಧಿ ಮುಗಿದಿದೆ. ಪಂಚಾಯತ್ ಸದಸ್ಯರ ಬಳಿ ತಿಳಿಸಿದರೆ ಪಿಡಿಒ ಗೆ ದೂರು ಕೊಡಿ ಎನ್ನುತ್ತಾರೆ. ಪಿಡಿಓ ರವರು ಹೆದ್ದಾರಿ ಗುತ್ತಿಗೆದಾರರಿಗೆ ಹೇಳಿದ್ದೇನೆ ಎಂದು ತಿಳಿಸುತ್ತಾರೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಗ್ರಾಮಸ್ಥರಿಗೆ ಕಾಡುತ್ತಿದೆ.
ಕಡು ಬೇಸಿಗೆಯ ಕಾಲದಲ್ಲಿ ದಿನವಿಡಿ ಧಾರಾಕಾರವಾಗಿ ನೀರು ಸೋರಿಕೆಯಾಗುತ್ತಿದ್ದು, ಬೇಜವಾಬ್ದಾರಿಯ ನಡವಳಿಕೆಗೆ ಕಡಿವಾಣ ಹಾಕುವವರು ಯಾರು? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
