ಕುಚ್ಚೂರು ಶ್ರೀ ಕೊಡಮಣಿತ್ತಾಯ ಧೂಮಾವತಿ ಮತ್ತು ಪರಿವಾರ ದೈವಗಳ ಗರಡಿ ಟ್ರಸ್ಟ್ ವತಿಯಿಂದ ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ಕಾಲಂಪ್ರತಿಯ ಸಂಪ್ರದಾಯದಂತೆ ನಡೆಯುವ ವಾರ್ಷಿಕ ನೇಮೋತ್ಸವವು ಏ. 16ರಂದು ನಡೆಯಲಿದೆ.
ಅಂದು ಬೆಳಿಗ್ಗೆ 9.00ಗಂಟೆಗೆ ತೋರಣ ಮುಹೂರ್ತ, 10.00 ಗಂಟೆಗೆ ನವಕ ಪ್ರಧಾನ ಹೋಮ, 11.00ರಿಂದ ಹಣ್ಣುಕಾಯಿ ಸೇವೆ, ಪ್ರಸಾದ ವಿತರಣೆ, ಗಂಟೆ 6.30ಕ್ಕೆ ಧರ್ಮರಸು ದೈವದ ಕೋಲ, ಸಂಜೆ 7.00ರಿಂದ ಅನ್ನಸಂತರ್ಪಣೆ, ರಾತ್ರಿ7.30ಕ್ಕೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ಕೋಲ, ರಾತ್ರಿ 10.30ಕ್ಕೆ ತುಲಾಭಾರ ಸೇವೆ, ರಾತ್ರಿ 11.00ರಿಂದ ದೈವಗಳ ದರ್ಶನ, ಬಲಿ, ಮುಖಾಮುಖಿ, ರಾತ್ರಿ ಗಂಟೆ1.00ಕ್ಕೆ ಧೂಮಾವತಿ ಕೋಲ ನಡೆಯಲಿದೆ.
