ಕಾರ್ಕಳ

ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ  ಧ್ಯಾನ ಕೇಂದ್ರದಲ್ಲಿ  ‘ತಾಯಂದಿರ ದಿನ ‘ ಆಚರಣೆ

ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ ಧ್ಯಾನ ಕೇಂದ್ರದಲ್ಲಿ ತಾಯಂದಿರ ದಿನ’  ಆಚರಿಸಲಾಯಿತು.
ತಾಯಂದಿರ ಜೊತೆ ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ಸಮಾಜದಲ್ಲಿ ತಾಯಂದಿರ ವಿಶೇಷ ಪಾತ್ರ ವನ್ನು ಚರ್ಚಿಸಿ ಮಾತನಾಡಿದ ಧ್ಯಾನ ಕೇಂದ್ರದ ಸಂಚಾಲಕಿ ಬಿ ಕೆ ಯಶೋದಾ, ತಾಯಿಯು ಪ್ರೀತಿಯ ಸಾಕಾರಮೂರ್ತಿ ಮತ್ತು ಜೀವನದ ಮೊದಲ ಗುರು. ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಮೂಲ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾತೆಯರು ಅಮ್ಮಂದಿರ ಪಾತ್ರವು ಆಧುನಿಕತೆಯ ಜಗತ್ತಿನ ಜೊತೆಗೆ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ವಿಶ್ಲೇಷಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು, ಪಾಲ್ಗೊಂಡಿದ್ದ ಎಲ್ಲ ತಾಯಂದಿರು ಸಕ್ರಿಯವಾಗಿ ಭಾಗಿಯಾಗಿದ್ದರು.

Related posts

ಕಾರ್ಕಳ: ಸ್ಕೂಟಿಗೆ ಬಸ್ ಡಿಕ್ಕಿ

Madhyama Bimba

ಶ್ರೀಮತಿ ಆರತಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ವಿದ್ಯಾರತ್ನ ಪ್ರಶಸ್ತಿ

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯಿಂದ ಕ್ರಿಸ್ಮಸ್ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More