ಕಾರ್ಕಳ: ಹಿರಿಯಡ್ಕ ಓಂತಿಬೆಟ್ಟು ಬಳಿ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ. 27ರಂದು ನಡೆದಿದೆ.
ಯರ್ಲಪಾಡಿಯ ಪುಷ್ಕರ್ ಪೂಜಾರಿ ಗಾಯಗೊಂಡ ಬೈಕ್ ಸವಾರ.
ಈತ ಬೈಲೂರಿನಿಂದ ಉಡುಪಿಗೆ ಹೋಗುತ್ತಿರುವಾಗ ಬೆಳಿಗ್ಗೆ ಗಂಟೆ ೭.೧೫ರ ಸುಮಾರಿಗೆ ಓಂತಿಬೆಟ್ಟು ಪ್ರಗತಿ ಪೈಂಟ್ ಶಾಪ್ ಬಳಿವಿರುದ್ದ ದಿಕ್ಕಿನಿಂದ KA-20-D-0331 ಲಾರಿ ಚಾಲಕ ಶಿವಲಿಂಗಯ್ಯ ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಹೋಗುವ ರಸ್ತೆಗೆ ಹೋಗಲು ಲಾರಿಯನ್ನು ಒಮ್ಮೆಲೇ ತಿರುಗಿಸಿದ ಪರಿಣಾಮ ಲಾರಿಯ ಹಿಂಭಾಗ ಪುಷ್ಕರ್ ಪೂಜಾರಿಯವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ಗೆ ತಾಗಿ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ.
ಅಪಘಾತದ ರಭಸಕ್ಕೆ ತಲೆಗೆ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
