ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ರಸ್ತೆ ನಿರ್ಮಾಣ ಕಾಮಗಾರಿಗಳ ಅಸಲಿ ಗುಣ ಪಸರಿಸಲಾರಂಭಿಸಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತೆ ಜನರನ್ನು ಭೀತಿಗೆ ತಳ್ಳಿದೆ. ಮೂಡುಬಿದಿರೆ ಕಾರ್ಕಳ ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ದಿನ ನಿತ್ಯ ಸುದ್ದಿಯಲ್ಲಿದೆ. ಮಳೆಗಾಲದಲ್ಲಿ ಮತ್ತೆ ತನ್ನ ಅಸಮರ್ಪಕ ಕಾಮಗಾರಿ ಮೂಲಕ ಮತ್ತೊಮ್ಮೆ ಮುನ್ನಲೆಗೆ ಬಂದಂತಾಗಿದೆ.

ತೆಂಕಮಿಜಾರು ಪಂಚಾಯತ್ ವ್ಯಾಪ್ತಿಯ ತೊಡಾರು ಬಳಿ ನಿರ್ಮಿಸಲಾದ ಅಂಡರ್ ಪಾಸ್ ಬಳಿ ರಸ್ತೆ ಅಂಚಿನ ಭಾಗ ಮಳೆಯ ತೀವ್ರತೆಗೆ ಕುಸಿದು ನೀರು ಬೀಳುವ ಮೂಲಕ ಮಣ್ಣನ್ನು ಕೊಚ್ಚಿಕೊಂಡು ಹೋಗಿದೆ. ಈ ಬಗ್ಗೆ ಡಿಬಿಎಲ್ ಕಾಮಗಾರಿಯನ್ನು ಜನರು ಸಾಮಾಜಿಕ ಜಾಲ ತಾಣ ಮೂಲಕ ದೂರಿಕೊಂಡಿದ್ದಾರೆ.
