Blog

ನಕ್ರೆ ಕುಂಜಿಬೆಟ್ಟುವಿನಲ್ಲಿ ಕಾರ್ಯಕರ್ತರ ಸಭೆ

🔴ಜನ ಹಿತ ಮರೆತು ಅಧಿಕಾರಕ್ಕಾಗಿ ಕಚ್ಚಾಟದಲ್ಲೆ ಕಾಲ ಕಳೆಯುತ್ತಿದೆ ಕಾಂಗ್ರೆಸ್ಸ್- ಕುಕ್ಕುಂದೂರು ಪಳ್ಳಿ ಕಾರ್ಯಕರ್ತರ ಸಭೆಯಲ್ಲಿ ವಿ ಸುನಿಲ್‌ ಕುಮಾರ್‌ ಕಿಡಿ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಪಳ್ಳಿ ಕುಕ್ಕುಂದೂರು ಗ್ರಾಮಗಳ ಕಾರ್ಯಕರ್ತರ ಬೂತ್ ಸಂಘಟನಾ ಸಭೆಯು ನಕ್ರೆ ಕುಂಜುಬೆಟ್ಟುವಿನಲ್ಲಿ ನಡೆಯಿತು. ಮಂಡಲ ಅಧ್ಯಕ್ಷರಾದ  ನವೀನ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಬೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ನಮ್ಮ ಮುಂದಿರುವ ಕೆಲವು ವಿಶೇಷ ಚಟುವಟಿಕೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕುಮಾರ್ ಗ್ರಾಮೀಣ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿ ಬೂತಿನ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಪದಾಧಿಕಾರಿಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕು. ಬಿಜೆಪಿಯ ತತ್ವ ಆದರ್ಶಗಳನ್ನು ದೇಶಪ್ರೇಮದ ಜಾಗೃತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು. ಸರಕಾರದ ಸವಲತ್ತುಗಳು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮೊದಲದ ವಿಷಯಗಳ ಬಗ್ಗೆ ವಿವರಣೆ ನೀಡಿದರು.


ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಜನತೆಗೆ ಆದ ದ್ರೋಹದ ಬಗ್ಗೆ ಉಲ್ಲೇಖಿಸುತ್ತಾ ಕೇವಲ ಗ್ಯಾರಂಟಿ ಯೋಜನೆಗಳಿಗೆ ಪ್ರಚಾರಗಿಟ್ಟಿಸಿಕೊಂಡು ಅಧಿಕಾರಕ್ಕಾಗಿ ಕಚ್ಚಾಟ ಮಾಡಿಕೊಂಡು ಕಾಲ ಕಳೆದದ್ದು ಬಿಟ್ಟರೆ ಬೇರೆ ಯಾವ ಸಾಧನೆಯು ಈ ಸರಕಾರದ್ದು ಇಲ್ಲವಾಗಿದೆ ಬಡಜನರ ಬದುಕಿಗೆ ಶಾಪವಾಗಿರುವ ಈ ಸರ್ಕಾರ ದಬ್ಬಾಳಿಕೆ, ದೌರ್ಜನ್ಯ, ಸ್ವಜನ ಪಕ್ಷಪಾತ, ಆಡಳಿತ ಯಂತ್ರದ ದುರುಪಯೋಗದ ಕುರಿತು ತಳಮಟ್ಟದಲ್ಲಿ ಧ್ವನಿ ಎತ್ತುವ ಕೆಲಸವಾಗಬೇಕಿದೆ. ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ನೀಡದೆ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿರುವ ಸರಕಾರಕ್ಕೆ ಜನಾಕ್ರೋಶದ ಬಿಸಿ ಮುಟ್ಟಿಸುವ ಕೆಲಸವಾಗಬೇಕು ಎಂದು ನುಡಿದರು.


ಪಕ್ಷದ ಹಿರಿಯರಾದ ಅಂತೋನಿ ಡಿಸೋಜಾ ಮಂಡಲ ಕಾರ್ಯದರ್ಶಿ ಸುಮಿತ್ ಶೆಟ್ಟಿ  ಶಕ್ತಿ ಕೇಂದ್ರ ಅಧ್ಯಕ್ಷರಾದ ಸಂದೀಪ್ ಅಂಚನ್ ಪ್ರಧಾನ ಕಾರ್ಯದರ್ಶಿ, ಯೋಗೀಶ್ ಸಾಲಿಯಾನ್ ಪದಾಧಿಕಾರಿಗಳಾದ ರಾಕೇಶ್ ಶೆಟ್ಟಿ ರವಿಕುಮಾರ್ ಶೆಟ್ಟಿ ಮೋಹನ್ ದಾಸ್ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಪರಶುರಾಮ ಪ್ರತಿಮೆ ನಿರ್ಮಾತನ ವಿರುದ್ಧದ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ

Madhyama Bimba

ಪಾಜಗುಡ್ಡೆ ಶ್ರೀ ಸತ್ಯ ಸಾರಮಣಿ ಪೂಜಾ ಸಮಿತಿ

Madhyama Bimba

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More