ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿವಂಗತ ಸುಂದರಿ ಶೆಡ್ತಿ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಶ್ರೀನಾಥ್ ಶೆಟ್ಟಿ ಮುಂಬೈ ಇವರ ಪರವಾಗಿ 21ನೇ ವರ್ಷದ ಪುಸ್ತಕ, ಬ್ಯಾಗ್, ಕೊಡೆ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕರಾದ ಸಂಜೀವ ಪೂಜಾರಿ, ಮುಖ್ಯ ಅತಿಥಿಗಳಾದ ನಿವೃತ್ತ ಮಹಾ ಪ್ರಭಂದಕರು ಕರ್ನಾಟಕ ಬ್ಯಾಂಕ್ ನಾಗರಾಜ್ ರಾವ್, ಮಾಜಿ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ನಿವೃತ್ತ ಅಧ್ಯಾಪಕರಾದ ಜನಾರ್ಧನ ಹೆಗ್ಡೆ ಹೆಪ್ಪಳ,ನಿವೃತ್ತ ಮುಖ್ಯೋಪಾಧ್ಯಾಯರಾದ ಉದಯ ಶೆಟ್ಟಿ ಬಿ., ಶ್ರೀಮತಿ ಅಮಿತಾ ಉದಯ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ತಾರಾನಾಥ್ ಶೆಟ್ಟಿ, ದಿನೇಶ್ ಪೂಜಾರಿ, ಶ್ರೀಮತಿ ಭವ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಪ್ರೀತೇಶ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಗೋವಿಂದ ಜೋಗಿ, ಜೀವಾನಂದ ಶೆಟ್ಟಿ ಯರ್ಲಪಾಡಿ, ಪ್ರಭಾಕರ ಹೆಗ್ಡೆ, ಯರ್ಲಪಾಡಿ, ಮಹೇಶ್ ಶೆಟ್ಟಿ ಕಣಿಲ, ದಯಾನಂದ ಪ್ರಭು ಹೆಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಆಶಾರವರು ವರದಿ ವಾಚಿಸಿದರು. ಶಿಕ್ಷಕರಾದ ವಿಜಯ ಸ್ವಾಗತಿಸಿ, ಶಿಕ್ಷಕಿ ಸ್ನೇಹ ಧನ್ಯವಾದವಿತ್ತರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಶ್ವಿನಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.
