ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆಸ್ಸಿಯಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಬಂದ ಖಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದು, ಈ ವೇಳೆ ಜುಗಾರಿ ಆಡುತ್ತಿದ್ದ ಸುಜೀತ್, ಅಭಿಮನ್ಯು, ಮಹೇಶ, ಧೀರಜ್, ನರೇಶ್ ಕುಮಾರ್, ಪ್ರಶಾಂತ, ಎಂಬವರನ್ನು ವಶಕ್ಕೆ ಪಡೆದಿದ್ದು ಈ ವೇಳೆ ಇತರೆ ನಾಲ್ಕು ಜನರಾದ ಯಶೋದರ (ಅಣ್ಣು), ನೂರು ಮಹಮ್ಮದ್, ರವಿಶೆಟ್ಟಿ, ಸತೀಶ್ ರವರು ತಪ್ಪಿಸಿಕೊಂಡಿರುತ್ತಾರೆ.
ದಾಳಿಯ ವೇಳೆ ಜುಗಾರಿ ಬಳಸಿದ ರೂ 16,350/- ನಗದು, ಇಸ್ಪೀಟ್ ಎಲೆಗಳು, ಹಾಗೂ ವಶಪಡಿಸಿಕೊಂಡ 7- ಮೊಬೈಲ್ಗಳ ಒಟ್ಟು ಅಂದಾಜು ಮೊತ್ತ 17,000, ಖುರ್ಚಿ ಮತ್ತು ಪೀಟೋಪಾಕರಣಗಳ ಅಂದಾಜು ಮೌಲ್ಯ ಒಟ್ಟು 10.500 ರೂಪಾಯಿಗಳು ಆಗಿರುತ್ತದೆ.
ಈ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 62/2026 ಕಲಂ: 79. 80 ಕೆ ಪಿ ಆಕ್ಟ್, ಮತ್ತು ಕಲಂ: 112(1), ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾಗಿರುತ್ತದೆ.
ತಲೆಮರೆಸಿಕೊಂಡಿದ್ದ ಆರೋಪಿಗಳು ಮತ್ತು ಜುಗಾರಿ ಆಡುವ ಅವಕಾಶ ಮಾಡಿಕೊಟ್ಟ ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆಸ್ಸಿಯ ಮಾಲೀಕರಿಗಾಗಿ ಹುಡುಕಾಟ ಮುಂದುವರೆದಿರುತ್ತದೆ.
