Blog

ನಿಟ್ಟೆಯಲ್ಲಿ ಪೊಲೀಸ್ ದಾಳಿ

ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಹೋಟೆಲ್‌ ಸನ್ಮಾನ್ ರೆಸಿಡೆಸ್ಸಿಯಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಬಂದ ಖಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದು, ಈ ವೇಳೆ ಜುಗಾರಿ ಆಡುತ್ತಿದ್ದ ಸುಜೀತ್, ಅಭಿಮನ್ಯು, ಮಹೇಶ, ಧೀರಜ್‌, ನರೇಶ್‌ ಕುಮಾರ್, ಪ್ರಶಾಂತ, ಎಂಬವರನ್ನು ವಶಕ್ಕೆ ಪಡೆದಿದ್ದು ಈ ವೇಳೆ ಇತರೆ ನಾಲ್ಕು ಜನರಾದ ಯಶೋದರ (ಅಣ್ಣು), ನೂರು ಮಹಮ್ಮದ್‌, ರವಿಶೆಟ್ಟಿ, ಸತೀಶ್‌ ರವರು ತಪ್ಪಿಸಿಕೊಂಡಿರುತ್ತಾರೆ.

 

ದಾಳಿಯ ವೇಳೆ ಜುಗಾರಿ ಬಳಸಿದ ರೂ 16,350/- ನಗದು, ಇಸ್ಪೀಟ್ ಎಲೆಗಳು, ಹಾಗೂ ವಶಪಡಿಸಿಕೊಂಡ 7- ಮೊಬೈಲ್‌ಗಳ ಒಟ್ಟು ಅಂದಾಜು ಮೊತ್ತ 17,000, ಖುರ್ಚಿ ಮತ್ತು ಪೀಟೋಪಾಕರಣಗಳ ಅಂದಾಜು ಮೌಲ್ಯ ಒಟ್ಟು 10.500 ರೂಪಾಯಿಗಳು ಆಗಿರುತ್ತದೆ.

 

ಈ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 62/2026 ಕಲಂ: 79. 80 ಕೆ ಪಿ ಆಕ್ಟ್, ಮತ್ತು ಕಲಂ: 112(1), ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾಗಿರುತ್ತದೆ.

ತಲೆಮರೆಸಿಕೊಂಡಿದ್ದ ಆರೋಪಿಗಳು ಮತ್ತು ಜುಗಾರಿ ಆಡುವ ಅವಕಾಶ ಮಾಡಿಕೊಟ್ಟ ನಿಟ್ಟೆ ಗ್ರಾಮದ ಹೋಟೆಲ್‌ ಸನ್ಮಾನ್ ರೆಸಿಡೆಸ್ಸಿಯ ಮಾಲೀಕರಿಗಾಗಿ ಹುಡುಕಾಟ ಮುಂದುವರೆದಿರುತ್ತದೆ.

Related posts

ದಸಂಸ ಮನವಿ

Madhyama Bimba

ಬೈಕ್ ಕಾರು ಅಪಘಾತ

Madhyama Bimba

ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More