ಕಾರ್ಕಳದಲ್ಲಿ ಆರಂಭಗೊಂಡು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನವನ್ನೇ ಕಾರ್ಕಳದತ್ತ ಸೆಳೆದ ಕಾರ್ಕಳ ಟೈಗರ್ಸ್ ಮೂಲಕ ಆತ್ಮ ಪರಮಾತ್ಮ ಕಾರ್ಯಕ್ರಮವು ಕಾರ್ಕಳದಲ್ಲಿ ಆಗಸ್ಟ್ 9 ಆದಿತ್ಯವಾರ ನಡೆಯಲಿದೆ.
ಕಾರ್ಕಳದ ಎಸ್ ವಿ ಟಿ ಶಿಕ್ಷಣ ಸಂಸ್ಥೆಯಲ್ಲಿ ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಆತ್ಮ ಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಆತ್ಮ ಪರಮಾತ್ಮ ಜೀವನದ ಸತ್ಯ ದರ್ಶನ, ಒಳ ಚಿಂತನ ಶಿಬಿರದ ಬಗ್ಗೆ ಧಾರ್ಮಿಕ ಅವಲೋಕನ ಆಗಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರ್ಕಳ ಟೈಗರ್ಸ್ ಮನವಿ ಮಾಡಿದೆ
