ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರ ಸಂಘ ನಿಯಮಿತ(ಲ್ಯಾಂಪ್ಸ್)ಕಾರ್ಕಳ ಇದರ 2025-26ನೇ ಸಾಲಿನ ಸರ್ವಸದಸ್ಯರ ಸಭೆಯು ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘವು ಪ್ರಗತಿ ಪಥದಲ್ಲಿ ಮುಂದುವರಿಯುತ್ತಿದ್ದು 2026ರ ಅಂತ್ಯಕ್ಕೆ ರೂ. 60.55 ಕೋಟಿ ಠೇವಣಿ ಹಾಗೂ ರೂ.48.60 ಕೋಟಿ ಹೊರಬಾಕಿ ಸಾಲ ಇರುತ್ತದೆ. ಸಂಘವು ಸದಸ್ಯರಿಗೆ ಶೇ.15% ಡಿವಿಡೆಂಡನ್ನು ಘೋಷಣೆ ಮಾಡಿದ್ದು ವರದಿ ವರ್ಷದಲ್ಲಿ ರೂ.57.74 ಲಕ್ಷ ಲಾಭಗಳಿಸಿರುತ್ತದೆ.
ಸಂಘದ ಉಪಾಧ್ಯಕ್ಷರಾದ ಬಾಲಗಂಗಾಧರ ಬಿ ಗೌಡ ನಿರ್ದೇಶಕರಾದ ರಾಘವ ನಾಯ್ಕ್, ರಮೇಶ್ ನಾಯ್ಕ್, ಬಾಬು ನಾಯ್ಕ್, ಶ್ರೀಮತಿ ವೀಣಾ ನಾಯ್ಕ್, ಸುರೇಶ್ ನಾಯ್ಕ್, ಸುರೇಶ ಗೌಡ, ಉದಯ ಕುಮಾರ್ ಹಾಗೂ ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಪ್ರಮೀಳ ನಾಯ್ಕ್ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕರಾದ ಚಂದ್ರಶೇಖರ ನಾಯ್ಕಸ್ವಾಗತಿಸಿ, ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ. ದಿವಾಕರ ಶೆಟ್ಟಿ ವರದಿ ವಾಚಿಸಿ, ಧನ್ಯವಾದವಿತ್ತರು.
