ಮೂಡುಬಿದಿರೆ

ಕಡಂದಲೆ -ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾರಿ ಸಿಡಿಲು ಗಾಳಿ ಮಳೆಗೆ ತೀವ್ರ ಹಾನಿ

 

ಮೂಡುಬಿದಿರೆ, : ಪಾಲಡ್ಕ ಗ್ರಾಮ ವ್ಯಾಪ್ತಿಯ ನಿನ್ನೆ ಸುರಿದ ಬಾರಿ ಗಾಳಿ ಮಳೆಗೆ 1ನೇ ವಾರ್ಡಿನ ರಾಮಮೋಹನ ನಗರ ಕಾಲೋನಿಯ ಲೀಲಾ ಶೆಟ್ಟಿ ಯುವರ ಮನೆಗೆ ನಿನ್ನೆ ರಾತ್ರಿ 9ಗಂಟೆಗೆ ಸುಮಾರಿಗೆ ಭಾರೀ ಗಾತ್ರದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದು ಮನೆಗೆ ತೀವ್ರ ಹಾನಿ ಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ.

ಸ್ಥಳೀಯರು ಕೂಡಲೇ ಧಾವಿಸಿ ಮನೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು.

ಕಡಂದಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಮ್ಮ ಗೌಡ್ತಿ ಯವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಗೆ ಹಾಗೂ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಆಗಿದೆ.

ಸ್ಥಳಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಸೀಕ್ವೆರ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಗಣೇಶ್ ಅಳಿಮರ್, ಗ್ರಾ.ಪಂ ಸದಸ್ಯ ಸುರೇಶ್ ಪೂಜಾರಿ ,ಜಗದೀಶ್ ಕೋಟ್ಯಾನ್. ಪಿಡಿಓ ರಕ್ಷಿತಾ, ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್,ಗ್ರಾಮ ಸಹಾಯಕ ರೀತೇಶ್ ಆಗಮಿಸಿ ಪರಿಶೀಲನೆ ನಡೆಸಿದರು.

Related posts

ಪಣಪಿಲದಲ್ಲಿ ಆಧಾರ್, ರಕ್ಷಣೆ ಯೋಜನೆ

Madhyama Bimba

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ  GIGGLE & GROW’ ಮಕ್ಕಳ ಆಟದ ಮನೆಯ ಉದ್ಘಾಟನೆ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಆಡಳಿತ ಮಂಡಳಿ ಚುನಾವಣೆ: ಹಾಲಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ನೇತೃತ್ವದ ತಂಡಕ್ಕೆ ಬಹುಮತದ ಗೆಲುವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More