ಕಾರ್ಕಳ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರೀಶ್ ಜೋಡುರಸ್ತೆಯವರಿಗೆ ಸನ್ಮಾನ

ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾ ಐಸಿರಿ ಹರೀಶ್ ಜೋಡುರಸ್ತೆ ಇವರನ್ನು ಚೈತನ್ಯ ಕಲಾವಿದರು ಬೈಲೂರು ಇವರ ವತಿಯಿಂದ ಡಿ.10ರಂದು ಅವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಚೈತನ್ಯ ಕಲಾವಿದರು ತಂಡದ ಸಾರಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸನ್ನ ಶೆಟ್ಟಿ ಬೈಲೂರು, ಉದ್ಯಮಿ ದಿನೇಶ್ ಬನಾನ್ ನಕ್ರೆ, ನ್ಯಾಯವಾದಿ ಸದಾನಂದ ಸಾಲಿಯಾನ್ ಬೈಲೂರು ಹಾಗೂ ಚೈತನ್ಯ ಕಲಾವಿದರು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Related posts

ಟೀಚರ್ಸ್ ಬ್ಯಾಂಕ್- ಹೊಸ ಆಡಳಿತ ಮಂಡಳಿ ಸದಸ್ಯರ ಆಯ್ಕೆ

Madhyama Bimba

ಶ್ರೀ ಮಾರಿಯಮ್ಮ ದೇವಸ್ಥಾನ ಕೌಡೂರು ಬೈಲೂರು ಚಂಡಿಕಾ ಹೋಮ

Madhyama Bimba

ಕ್ರೈಸ್ಟ್‌ಕಿಂಗ್: ವಾರ್ಷಿಕ ಕ್ರೀಡಾಕೂಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More