ಕಾರ್ಕಳ

ಕಾರ್ಕಳ ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ವಿವಿಧೆಡೆ ಅಪಾರ ಹಾನಿ

ಕಾರ್ಕಳ ತಾಲೂಕಿನಲ್ಲಿ ಮಾ. 12ರಂದು ಸಂಜೆ ಸುರಿದ ಗಾಳಿ ಮಳೆಗೆ ವಿವಿಧೆಡೆ ಅಪಾರ ಹಾನಿಯುಂಟಾಗಿದೆ.

ಕಾರ್ಕಳ ಕಸಬಾ ಗ್ರಾಮದ ಆನಂದರವರ ವಾಸ್ತವ್ಯದ ಮನೆಗೆ ಹಾನಿಯಾಗಿ ರೂ. 30ಸಾವಿರ, ನಿಟ್ಟೆಯ ಗುಲಾಬಿ ದೇವಾಡಿಗರವರ ವಾಸ್ತವ್ಯದ ಮನೆಗೆ ಹಾನಿಯಾಗಿ ರೂ. 90ಸಾವಿರ, ಕುಕ್ಕುಂದೂರು ಗ್ರಾಮದ ಕ್ಲಮೆಂಟ್ ವಲೇರಿಯನ್ ಅರಾನ್ನಾ ನಕ್ರೆ ಇವರ ಮನೆಗೆ ಹಾನಿಯಾಗಿ ರೂ. 25ಸಾವಿರ, ಕಾಂತಾವರ ಸಂಪ ಮೇರರವರ ಮನೆಗೆ ಹಾನಿಯಾಗಿ ರೂ. 30ಸಾವಿರ ನಷ್ಟ ಉಂಟಾಗಿದೆ.

ಮುಂಡ್ಕೂರು ಗ್ರಾಮದ ಶೀನ ಮೂಲ್ಯರವರ ಮನೆಗೆ ಹಾನಿಯಾಗಿ ರೂ. 80ಸಾವಿರ, ಸುಂದರಿ ಇವರ ಮನೆಗೆ ಹಾನಿಯಾಗಿ ರೂ. 50ಸಾವಿರ, ಚಂದು ಪೂಜಾರಿ ಇವರ ಮನೆಗೆ ಹಾನಿಯಾಗಿ 20ಸಾವಿರ, ಪ್ರೇಮ ಕೆ. ಶೆಟ್ಟಿಯವರ ಮನೆಗೆ ಹಾನಿಯಾಗಿ ರೂ. 40ಸಾವಿರ, ರೆಂಜಾಳ ಗ್ರಾಮದ ಸಂಜೀವ ಮೇರ ಇವರ ಮನೆಗೆ ಹಾನಿಯಾಗಿ ರೂ. 20ಸಾವಿರ, ನಲ್ಲೂರಿನ ಲಕ್ಷ್ಮೀ ಪೂಜಾರಿಯವರ ಮನೆಗೆ ಹಾನಿಯಾಗಿ ರೂ. 10ಸಾವಿರ, ಎರ್ಲಪಾಡಿಯ ಪ್ರಕಾಶ್ ಆಚಾರ್ಯರವರ ದನದ ಕೊಟ್ಟಿಗೆಗೆ ಹಾನಿಯಾಗಿ ರೂ. 5ಸಾವಿರ ನಷ್ಟ ಉಂಟಾಗಿದೆ.

Related posts

ಗ್ರಾಮ ಪಂಚಾಯತ್‌ಗಳ ಉಪಚುನಾವಣೆ ವೇಳಾಪಟ್ಟಿ ಪ್ರಕಟ

Madhyama Bimba

ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ

Madhyama Bimba

ಸಿದ್ಧರಾಮಯ್ಯರವರಿಂದ ರಾಜ್ಯದ ಜನತೆಗೆ 6ನೇ ಗ್ಯಾರೆಂಟಿ-ಬಿಪಿಎಲ್ ಪಡಿತರ ಚೀಟಿ ರದ್ಧತಿ ಭಾಗ್ಯ: ವಿ. ಸುನಿಲ್ ಕುಮಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More