ಹೆಬ್ರಿ: ಜೀರ್ಣೋದ್ಧಾರಗೊಳ್ಳುತ್ತಿರುವ ಶಿವಪುರ ಶ್ರೀಶಂಕರದೇವ ದೇವಸ್ಥಾನಕ್ಕೆ ನೂತನ ಧ್ವಜಮರಕ್ಕೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ತೈಲಾಧಿವಾಸ ಕಾರ್ಯ ನಡೆಯಿತು.



ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಯಕ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಭಟ್, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅರ್ಚಕರು, ಸ್ಥಳೀಯ ಪ್ರಮುಖರು, ಗಣ್ಯರು, ಭಕ್ತಸಮೂಹ, ಪ್ರಮುಖರಾದ ಶಿವಪುರ ಸುರೇಶ ಶೆಟ್ಟಿ, ಮೂರ್ಸಾಲು ಗೋಕುಲದಾಸ ನಾಯಕ್, ಮೂರ್ಸಾಲು ಮೋಹನದಾಸ ನಾಯಕ್, ಸಂತೋಷ ಶೆಟ್ಟಿ ನಾಯರಕೋಡು, ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಪ್ರಸನ್ನ ಸೂಡ, ಚಂದ್ರಶೇಖರ ಶೆಟ್ಟಿ, ಶ್ರೀನಿವಾಸ ಹೆಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಾವಿರಕ್ಕೂ ಹೆಚ್ಚು ಮಂದಿ ಧ್ವಜಮರಕ್ಕೆ ತೈಲಸಮರ್ಪಣೆ ಮಾಡಿದರು.
