ಮೂಡುಬಿದಿರೆ

ಸರಕಾರದ ಕಠಿಣ ನಿಯಾಮಾವಳಿ- ಬಗರ್ ಹುಕುಂ ಅಕ್ರಮ ಸಕ್ರಮ ಸಭೆ ನಿಧಾನಗತಿ: ಶಾಸಕ ಕೋಟ್ಯಾನ್

ಮೂಡುಬಿದಿರೆ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷನಾಗಿ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೆಲಸಗಳನ್ನು ನಿರ್ವಹಿಸುತ್ತಿದ್ದೇನೆ. ಕೃಷಿ ಜಾಗ ಹೊಂದಿರುವ ಕಳೆದ 20 ವರ್ಷಗಳಿಂದ ಕೃಷಿ ಭೂಮಿಯನ್ನು ಅನುಭೋಗಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ಸರಕಾರದ ನಿಯಾಮಾವಳಿಯಂತೇ ಜಾತಿ ಮತ ಪಕ್ಷ ಭೇಧವಿಲ್ಲದೆ ಕೃಷಿ ಭೂಮಿಯನ್ನು ಒದಗಿಸಿಕೊಡುವಲ್ಲಿ ಖಂಡಿತವಾಗಿಯೂ ಬದ್ಧನಾಗಿದ್ದೇನೆ. ಈಗಾಗಲೇ ತಹಶೀಲ್ದಾರ್‌ರವರಿಗೆ ಅಂತಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧ ಪಡಿಸಲು ಸೂಚನೆ ನೀಡಿರುವುದಾಗಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.


ಮೂಡುಬಿದಿರೆ ಶಾಸಕರ ಕಛೆರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರಕಾರ ಕಂದಾಯ ಇಲಾಖೆಯಡಿ ಹಲವಾರು ನಿಯಾಮಾವಳಿಯನ್ನು ರೂಪಿಸಿದ್ದು ಈ ನಿಯಾಮಾವಳಿಯಂತೆ ಬಗರ್ ಹುಕುಂ ತಂತ್ರಾಂಶದಲ್ಲಿ ನಮೂನೆ 50, 53, 57ರಲ್ಲಿ ಅರ್ಜಿಗಳ ವಿಲೇವಾರಿಗೆ 11 ಹಂತವನ್ನು ನಿಗದಿಪಡಿಸಿದೆ. ಈ ಹಂತಗಳನ್ನು ಕಂದಾಯ ಅಧಿಕಾರಿಗಳು ಪೂರ್ಣಗೊಳಿಸಿದ ನಂತರವೇ ಅಕ್ರಮ ಸಕ್ರಮ ಸಮಿತಿ ಕಡತಗಳನ್ನು ಅನುಮೋದಿಸಲಿದೆ ಎಂದು ಅವರು ಹೇಳಿದರು.


ಕಂದಾಯ ಇಲಾಖೆಯ ಕಠಿಣ ನಿಯಾಮಾವಳಿಯಂತೆ ಮೂಡುಬಿದಿರೆ ತಾಲೂಕಿನಲ್ಲಿ ಈಗಾಗಲೇ ಸುಮಾರು ೫ ಫೈಲುಗಳು ತಹಶೀಲ್ದಾರ್ ಮಟ್ಟದಲ್ಲಿ ಪೂರ್ಣಗೊಳ್ಳುತ್ತಿದ್ದು, ಅದಕ್ಕೆ ಸೇರ್ಪಡೆಯಾಗಿ ಮತ್ತೈದು ಫೈಲುಗಳನ್ನಾದರೂ ಪರಿಪೂರ್ಣಗೊಳಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿರುವುದಾಗಿ ಶಾಸಕ ಕೋಟ್ಯಾನ್ ತಿಳಿಸಿದರು.


ಈ ಪ್ರಕ್ರಿಯೆಯಡಿ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡುವರೆ ಅಕ್ರಮ ಸಕ್ರಮ ಸಮಿತಿ ರಚನೆಯಾದಂದಿನಿಂದ ತನ್ನ ಪ್ರಯತ್ನ ನಡೆಸಿದ್ದು, ಸರಕಾರದ ಕಠಿಣ ನಿಯಾಮಾವಳಿಗಳಿಂದ ತಡವರಿಸುತ್ತಿರುವುದಾಗಿ ಅವರು ತಿಳಿಸಿದರು.

ಈ ಹಿಂದಿನ ಅವಧಿಯಲ್ಲಿಯೂ ಯಾವುದೇ ಪಕ್ಷ ನೋಡದೇ ಅರ್ಹರಿಗೆ ಸವಲತ್ತುಗಳನ್ನು ನೀಡಿರುವುದನ್ನು ಅವರು ಸ್ಮರಿಸಿದರು.
ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆಯಿಂದ ಬಗರ್ ಹುಕುಂ ಜಾಗ ಮಂಜೂರಾತಿಗೆ ಇರುವ ಬಫರ್ ಝೋನ್ ನಿಯಾಮಾವಳಿಯನ್ನು ಕಡಿಮೆಗೊಳಿಸುವಂತೆ ಈಗಾಗಲೇ ಕಂದಾಯ ಸಚಿವ ಕೃಷ್ಣ ಭೈರೇಗೌಡರಲ್ಲಿ ವಿನಂತಿಸಿರುವುದಾಗಿ ಕೂಡ ತಿಳಿಸಿದರು. ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿ ಈ ವರ್ಷ ಸಭೆಯೇ ನಡೆಸಿಲ್ಲ ಮತ್ತು 80ರಷ್ಟು ಫೈಲುಗಳು ಮಂಜೂರಾತಿಗೆ ಬಾಕಿಯಿದೆ ಎಂಬುದಾಗಿ ಸುಳ್ಳು ಮಾಹಿತಿಗಳನ್ನು ಮಾಧ್ಯಮದ ಮೂಲಕ ಜನರಿಗೆ ಕೊಟ್ಟಿರುವುದಕ್ಕೆ ಆಕ್ಷೇಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿರಿಯ ನಾಯಕ ಬಾಹುಬಲಿ ಪ್ರಸಾದ್, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಫೂಜಾರಿ, ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ಪ್ರಮುಖರಾದ ಶಾಂತಿಪ್ರಸಾದ್ ಹೆಗ್ಡೆ, ಲಕ್ಷ್ಮಣ ಪೂಜಾರಿ, ಸುಕೇಶ್ ಶೆಟ್ಟಿ, ಗೋಪಾಲ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

Madhyama Bimba

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ  ವರ್ಧಂತ್ಯುತ್ಸವ ಗಣ್ಯರ ಶುಭಾಶಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More