ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ನ. 11ರಂದು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳ ಪಡುವ ಹೆಬ್ರಿ ತಾಲೂಕು ಕುರ್ಪಾಡಿ-ಖಜಾನೆ- ಮುನಿಯಾಲು ರಸ್ತೆಯ ಭಾಗಗಳಲ್ಲಿ ಜೆ.ಸಿ.ಬಿ/ಹಿಟಾಚಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಇಲಾಖಾ ಅನುಮತಿಯಿಲ್ಲದೆ ಅನಧಿಕೃತವಾಗಿ ರಸ್ತೆಯ ಭಾಗದಲ್ಲಿ ಅಗೆದು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಮಾಡುವುದಲ್ಲದೇ ಸರಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿ ನಷ್ಟ ಉಂಟು ಮಾಡಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಸಿ.ಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
