ಕಾರ್ಕಳಹೆಬ್ರಿ

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆತ-ವಾಹನ ಸಂಚಾರಕ್ಕೆ ತೊಂದರೆ

ಅಜೆಕಾರು: ಇಲಾಖಾ ಅನುಮತಿಯಿಲ್ಲದೆ ಅಪರಿಚಿತರಿಂದ ರಸ್ತೆಯ ಭಾಗದಲ್ಲಿ ಅಗೆದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.


ನ. 11ರಂದು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳ ಪಡುವ ಹೆಬ್ರಿ ತಾಲೂಕು ಕುರ್ಪಾಡಿ-ಖಜಾನೆ- ಮುನಿಯಾಲು ರಸ್ತೆಯ ಭಾಗಗಳಲ್ಲಿ ಜೆ.ಸಿ.ಬಿ/ಹಿಟಾಚಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಇಲಾಖಾ ಅನುಮತಿಯಿಲ್ಲದೆ ಅನಧಿಕೃತವಾಗಿ ರಸ್ತೆಯ ಭಾಗದಲ್ಲಿ ಅಗೆದು ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಮಾಡುವುದಲ್ಲದೇ ಸರಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಿ ನಷ್ಟ ಉಂಟು ಮಾಡಿದ್ದಾರೆ.


ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತ್ರಿನೇಶ್ವರ ಸಿ.ಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

ಇನ್ನಾ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Madhyama Bimba

ಕ್ರಿಯೇಟಿವ್ ಉಡುಪಿ ಶಾಖೆಯ ಹೊಂಗಿರಣ ಉಚಿತ ಶಿಕ್ಷಣಕ್ಕೆ ಬೆಳಗಾವಿಯಲ್ಲಿ ಅರ್ಹತಾ ಪರೀಕ್ಷೆ

Madhyama Bimba

ಮುದ್ರಾಡಿ : ಉಪ್ಪಳದಲ್ಲಿ ಧರ್ಮಸ್ಥಳ ಯೋಜನೆಯ ” ವಾತ್ಸಲ್ಯ ಮನೆ” ಹಸ್ತಾಂತರ – ಗ್ರಹಪ್ರವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More