ಕಾರ್ಕಳ: ಕಲ್ಲೊಟ್ಟೆ ಯುವಕ ವೃಂದದ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ನಟನ ರಂಗಮಂಟಪದ ವೇದಿಕೆ ಯಲ್ಲಿ ಜರುಗಿತು.

ಕಾರ್ಕಳದಲ್ಲಿ ಸಮಾಜ ಸೇವೆ ಮಾಡುತ್ತಿರುವ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಪ್ರಶಾಂತ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಂಗೇಶ್ ಶೆಣೈ, ನಾಗರಾಜ್ ಕಿಣಿ, ಯುವಕ ವೃಂದದ ಅಧ್ಯಕ್ಷ ಪ್ರತಾಪ್ ಆಚಾರ್ಯ, ಗೌರವಾಧ್ಯಕ್ಷ ಕೆ.ಎಸ್. ವಿಶ್ವನಾಥ್, ಕಾರ್ಯದರ್ಶಿ ಕೆ.ಎಸ್. ರಘುನಾಥ್, ಕೋಶಾಧಿಕಾರಿ ಪ್ರದೀಪ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
