ಕಾರ್ಕಳ: ಕಾರ್ಕಳ ತಾಲೂಕು ಕಚೇರಿಯ ಸಹಾ ಅಭಿಲೇಖಾಲಯ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಶ್ರೀನಾಥ್ರವರ ಮೇಲೆ ಪ್ರಕರಣ ದಾಖಲಾಗಿದೆ.

ಇವರು2022-23 ನೇ ಸಾಲಿನಲ್ಲಿ ಕಾರ್ಕಳ ತಾಲೂಕು ಅಜೆಕಾರು ಹೋಬಳಿಯ ಎರ್ಲಪಾಡಿ ಗ್ರಾಮದ mr 03/10-11 ರ ಕಡತವನ್ನು2022-23 ನೇ ಸಾಲಿನಲ್ಲಿ ಅರ್ಜಿದಾರರಿಗೆ ಮಾಹಿತಿ ಹಕ್ಕಿನಡಿಯಲ್ಲಿ ದಾಖಲಾತಿಯನ್ನು ನೀಡಿರುತ್ತಾರೆ. ಅರ್ಜಿದಾರರಿಗೆ ಮಾಹಿತಿ ನೀಡಿದ ಕಡತವು ಪ್ರಸುತ್ತ ಅಭಿಲೇಖಾಲಯದ ದಾಖಲೆ ಪತ್ರದ ಕಡತವು ಕಂಡು ಬರುವುದಿಲ್ಲವಾಗಿ ಕೆ.ಹರಿಪ್ರಸಾದ. ಉಪತಹಶೀಲ್ದಾರರು. ಅಭಿಲೇಖಾಲಯ ಕಾರ್ಕಳ ತಾಲೂಕು ಕಛೇರಿ ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2026 ಕಲಂ: 9 ಸಾರ್ವಜನಿಕ ಕಡತ ಸಂರಕ್ಷಣಾ ಕಾಯ್ದೆ 2010 ರಂತೆ ಪ್ರಕರಣ ದಾಖಲಾಗಿರುತ್ತದೆ.
