ಶಿರ್ತಾಡಿ – ವಾಲ್ಪಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 14ರಂದು ಸಾಯಂಕಾಲ ಗಂಟೆ 5-30ಕ್ಕೆ ಕಳೆದ 3 ವರ್ಷಗಳಿಂದ ದೇವಸ್ಥಾನದಲ್ಲಿ ತಂತ್ರಿವರ್ಯರಾದ ವಿದ್ವಾನ್। ವೇ|| ಮೂ|| ಉಮೇಶ್ ಭಟ್ ಅವರಿಗೆ ಸನ್ಮಾನ ನಡೆಯಲಿದೆ.

ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವದಲ್ಲಿ, ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸಿದ್ದರು.
ಸಾಯಂಕಾಲ ಘಂಟೆ 5-30ರಿಂದ ಯಕ್ಷಗಾನ ನಾಟ್ಯ ವೈಭವ (ಶ್ರೀ ಮಹಾಲಿಂಗೇಶ್ವರ ಯಕ್ಷನಾಟ್ಯ ತರಬೇತಿ ಕೇಂದ್ರ, ಅರ್ಜುನಾಪುರ ಇದರ ಮಕ್ಕಳಿಂದ) ಘಂಟೆ 7-00ರಿಂದ : ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನುವಂಶಿಕ ಆಸ್ರಣ್ಣರು ವೇ। ಮೂ। ಉಮಾಶಂಕರ್ ಭಟ್, ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ, ವೈದ್ಯರಾದ ಡಾ|| ಕೆ. ಕೃಷ್ಣರಾಜ್ ಭಟ್, .
ಡಾ|| ಆಶೀರ್ವಾದ್ ಎಂ. ಪಿ., ರೋಟರಿ ಪದವಿಪೂರ್ವ ಕಾಲೇಜು, ಪ್ರಾಂಶುಪಾಲರು ರವಿಕುಮಾರ್, ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಟ್ರಸ್ಟಿ ಶ್ರೀಮತಿ ಲತಾ ಜನಾರ್ಧನ್ ಆಚಾರ್ಯ ಭಾಗವಹಿಸಲಿದ್ದಾರೆ.
ನಂತರ ಉಮೇಶ್ ಮಿಜಾರ್ ಮತ್ತು ಬಳಗದವರಿಂದ ಕಾಮಿಡಿ ಶೋ “ತೆಲಿಕೆದ ಗೊಂಚಿಲ್”
ಹಾಸ್ಯ-ನಾಟ್ಯ-ಸಂಗೀತ, ರಾತ್ರಿ ಗಂಟೆ 7-45ರಿಂದ ಸಂಕ್ರಮಣ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.
