ಕಾರ್ಕಳ: “ಹೊರೆಯಿಂದ ಪರಿಹಾರದವರೆಗೆ ಕೈ ತೊಳೆಯುವ ಅಭಿಯಾನದ ಮೂಲಕ ಎಲ್ಲೆಡೆ ಸುರಕ್ಷಿತ ಆಹಾರ” ಎಂಬ ಜಾಗತಿಕ ಆಶಯಕ್ಕೆ ಧ್ವನಿಯಾಗುವ ನಿಟ್ಟಿನಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜೂ. 06ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಯಿತು.
ಆಹಾರದ ಸುರಕ್ಷತೆಯು ನಾವು ಊಟ ಮಾಡುವ ಮುನ್ನವೇ ಆರಂಭವಾಗುತ್ತದೆ ಎಂಬುದನ್ನು ಮನಗಂಡ ಶಾಲಾ ಆಡಳಿತ ಮಂಡಳಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಮೊದಲ ರಕ್ಷಣಾ ಕವಚವಾಗಿರುವ ’ಕೈ ತೊಳೆಯುವ ಪ್ರಕ್ರಿಯೆ’ ಕುರಿತು ಬೃಹತ್ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಶಿಕ್ಷಕರು ಅಶುದ್ಧವಾದ ಕೈಗಳ ಮೂಲಕ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಎಷ್ಟು ಸುಲಭವಾಗಿ ನಮ್ಮ ಆಹಾರವನ್ನು ಸೇರಬಲ್ಲವು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಾಗತಿಕ ಆರೋಗ್ಯ ಸಂಸ್ಥೆಗಳ ವರದಿಯ ಪ್ರಕಾರ, ಕೇವಲ ಸ್ವಚ್ಛತೆ ಮತ್ತು ಸರಿಯಾಗಿ ಕೈ ತೊಳೆಯುವ ಅಭ್ಯಾಸದಿಂದಲೇ ಶೇಕಡಾ ಅತಿ ಹೆಚ್ಚು ಆಹಾರ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು ಎಂಬುದನ್ನು ಮಕ್ಕಳಿಗೆ ನೆನಪಿಸಲಾಯಿತು.
