ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾಗಿದ್ದು, ನಂದಳಿಕೆಯಲ್ಲಿ ವಾಸವಾಗಿದ್ದ ಸೀತಾರಾಮ ಭಟ್
(88 ವರ್ಷ) ಸೆ. 8 ರಂದು ನಂದಳಿಕೆ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರ ಪತ್ನಿ ಶ್ರೀಮತಿ ಶಕುಂತಲಾ ರವರು ಮೂರು ವರ್ಷದ ಹಿಂದೆ ವಿಧಿವಶರಾಗಿದ್ದರು. ಅವರಿಗೆ
ಮೂವರು ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳು. ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು
ಅಳಿಯ – ಸೊಸೆಯಂದಿರಿದ್ದಾರೆ.
ಸೀತಾರಾಮ ಭಟ್ ಅವರು ಬೆಂಗಳೂರಿನಲ್ಲಿರುವ ಪೇಜಾವರ ಮಠದ ವಿದ್ಯಾ ಪೀಠದಲ್ಲಿ ಸುಮಾರು 22 ವರ್ಷ ಪ್ರಧಾನ ಪಾಕ ಶಾಸ್ತ್ರ ಅರ್ಚಕರಾಗಿ ಸೇವೆ ಸಲ್ಲಿಸಿದ್ಧರು.
ಪ್ರಥಮ ಪುತ್ರ ಪಿ. ರವಿರಾಜ್ ಭಟ್ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.
