Blog

ಬೆಳ್ಮಣ್ ನಲ್ಲಿ ಹಲ್ಲೆ


ಕಾರ್ಕಳ:  ಕಾರ್ಕಳ ಬೋಳ ಗ್ರಾಮದ ಪ್ರವೀಣ್ ಕುಮಾರ್ (32) ಹಾಗೂ ಪರಿಚಯದ ಸಂತೋಷ್ ಎಂಬವರು ಬೆಳ್ಮಣ್ ಪೇಟೆಯಲ್ಲಿರುವ  ಸೂರಜ್ ಬಾರ್ ಎಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ  ಮಾಡಿ ಸಂಜೆ ಸುಮಾರು  6.30 ಗಂಟೆಗೆ  ಬೆಳ್ಮಣ್ ಬಸ್ ನಿಲ್ದಾಣಕ್ಕೆ  ಬಂದಿದ್ದು, ಸಂತೋಷ್‌ನ ಬಳಿ ಬಾಕಿ ಇರುವ ಸಂಬಳ ರೂಪಾಯಿ 250 ಕೊಡುವಂತೆ ಕೇಳಿದಕ್ಕೆ ಇಬ್ಬರಿಗೂ  ಮಾತುಕತೆ ಬೆಳೆದು ಸಂತೋಷನು ಕೋಪದಿಂದ ಬಾರ್‌ನಿಂದ ಕುಡಿಯಲು ತಂದಿದ್ದ ಬಿಯರ್ ಬಾಟಲಿನಿಂದ ಪ್ರವೀಣ್ ಕುಮಾರ್ ತಲೆಗೆ  ಜೋರಾಗಿ  ಹೊಡೆದು ಇನ್ನು ಮುಂದೆ  ಬಾಕಿ ಇದ್ದ ಸಂಬಳ ಕೇಳಿದರೆ ಕೊಲ್ಲದೆ  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ತಿಳಿದು ಬಂದಿದೆ.


ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಆತ್ಮಹತ್ಯೆ

Madhyama Bimba

ಬೈಕ್ ಕಾರು ಅಪಘಾತ

Madhyama Bimba

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More