ಕಾರ್ಕಳ

ಕಾರ್ಕಳ: ನಲ್ಲೂರು ನಿವಾಸಿಗೆ ಹಾವು ಕಚ್ಚಿ ಮೃತ್ಯು

ಸಂತೋಷ, (32) ರವರು ಪರಪಾಡಿ , ನಲ್ಲೂರು ಗ್ರಾಮ ನಿವಾಸಿ ಯಾಗಿದ್ದು ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸಂತೋಷರವರು ಮನೆಯ ಹತ್ತಿರ ಕೃಷಿ ಕೆಲಸ ಮಾಡಿಕೊಂಡಿರುವ ಸಮಯದಲ್ಲಿ ಅವರ ಎಡಕಾಲಿಗೆ ನಾಗರಹಾವು ಕಚ್ಚಿರುತ್ತದೆ.

ಅವರ ತಾಯಿ ಮತ್ತು ಸಂಬಂಧಿಕರು ಚಿಕಿತ್ಸ ಗಾಗಿ ಕಾರ್ಕಳದ ಡಾ. ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.
ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.

ಅಲ್ಲಿಂದ ಚಿಕಿತ್ಸೆಗಾಗಿ ಪುನಃ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ಸಂತೋಷರವರು ಚಿಕಿತ್ಸೆಗೆ ಸ್ಪಂದಿಸದೇ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ವರಂಗ ಗ್ರಾಮದ ಭಜನಾ ಮಂಡಳಿಗಳಿಂದ ಗೋಗ್ರಾಸ ಸೇವೆ

Madhyama Bimba

ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದ ಯಶಸ್ಸು ತಾಳಲಾರದೆ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಹೇಳಿಕೆಗಳನ್ನು ನೀಡುತ್ತಿರುವ ಕಾರ್ಕಳ ಬಿಜೆಪಿ,‌ ಹೊಟ್ಟೆ ಉರಿಯ ಬೆಂಕಿ ಒಂದು ದಿನ ನಿಮ್ಮನ್ನೆ ಸುಡುತ್ತದೆ ಎಚ್ಚರವಿರಲಿ – ಶುಭದ ರಾವ್

Madhyama Bimba

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More