ಅಜೆಕಾರು: ಕಾಣೆಯಾದ ವೃದ್ಧರೋರ್ವರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಡಿ. 07ರಂದು ವರದಿಯಾಗಿದೆ.

ಅಂಡಾರು ಗ್ರಾಮದ ಮುಟ್ಲುಪಾಡಿ ದರ್ಖಾಸು ಕೆಸಲ್ಕೆ ಮನೆ ನಿವಾಸಿ ಕಾಳು ನಾಯ್ಕ (79) ಮೃತಪಟ್ಟವರು.

ಕಾಳು ನಾಯ್ಕ ರವರು ಪ್ರಾಯಸ್ಥರಾಗಿದ್ದು, ಮರೆವು ಕಾಯಿಲೆಯಿಂದ ಆಗಾಗ ಮನೆಯಿಂದ ಹೋದವರು 2-3 ದಿನಗಳ ನಂತರ ವಾಪಾಸ್ಸು ಮನೆಗೆ ಬರುತ್ತಿದ್ದರು. ಡಿ. 03ರಂದು ಪಕ್ಕದ ಮನೆಗೆ ಬೀಗರ ಊಟಕ್ಕೆ ಹೋದವರು, ವಾಪಾಸ್ಸು ಮನೆಗೆ ಬಾರದೇ ಅಕ್ಕ-ಪಕ್ಕದವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗದೆ ಡಿ.06ರಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿರುತ್ತದೆ.

ಡಿ.07 ಕಾಳು ನಾಯ್ಕರವರು ಮರೆವು ಕಾಯಿಲೆಯಿಂದ ದಾರಿ ತಪ್ಪಿ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿರುತ್ತಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
