ಹೆಬ್ರಿ : ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19-21 ರ ವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲದ ಹಿನ್ನೆಲೆಯಲ್ಲಿ ಗೋಧಾಮಕ್ಕೆ ಕಾರ್ಕಳ ಶಾಸಕರಾದ ಶ್ರೀಮನ್ನಾಗಮಂಡಲ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀಮನ್ನಾಗಮಂಡಲದ ಪೂರ್ವಸಿದ್ಧತೆಗಳನ್ನು ಗಮನಿಸಿದರು.

ಕಡ್ತಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ ಹೆಗ್ಡೆ ಕಡ್ತಲ, ನಾಗಮಂಡಲ ಸಮಿತಿಯ ಕಾರ್ಯದರ್ಶಿ ದಾಮೋಧರ ಶರ್ಮ, ಜ್ಯೋತಿ ಹರೀಶ್, ಗೋಧಾಮದ ರಕ್ಷತ್ ಆಚಾರ್ಯ, ಪ್ರಕಾಶ ಶೆಟ್ಟಿ ಮುನಿಯಾಲು, ಸುಹಾಸ ಶೆಟ್ಟಿ, ಆಶಿತ್, ದಯಾನಂದ್ ಕೆ. ಮತ್ತಿತರರು ಉಪಸ್ಥಿತರಿದ್ದರು.
